Sunday, August 17, 2025

ಬನವಾಸಿ ಕದಂಬರು (ಕ್ರಿ.ಶ 345 - 519)

 

ಬನವಾಸಿ ಕದಂಬರು (ಕ್ರಿ.ಶ 345 - 519)

  • ಸ್ಥಾಪಕ: ಮಯೂರವರ್ಮ.

  • ರಾಜಧಾನಿ: ಬನವಾಸಿ (ಉತ್ತರ ಕನ್ನಡ ಜಿಲ್ಲೆ).

  • ಲಾಂಛನ: ಸಿಂಹ.

  • ಧ್ವಜ: ವಾನರ ಧ್ವಜ.

  • ಆಡಳಿತ ಭಾಷೆ: ಕನ್ನಡ ಮತ್ತು ಸಂಸ್ಕೃತ.

  • ಇವರು ಕರ್ನಾಟಕದ ಮೊದಲ ರಾಜಮನೆತನವಾಗಿದೆ.

  • ಕದಂಬರ ಇತಿಹಾಸಕ್ಕೆ ಮೂಲಾಧಾರಗಳು: ಗುಡ್ನಾಪುರ ಶಾಸನ, ಚಂದ್ರವಳ್ಳಿ ಶಾಸನ, ಮಳವಳ್ಳಿ ಶಾಸನ, ತಾಳಗುಂದ ಶಾಸನ, ಮತ್ತು ಹಲ್ಮಡಿ ಶಾಸನ.

ಪ್ರಮುಖ ಅರಸರು

  • ಮಯೂರವರ್ಮ (345-365): ಈತನ ಮೊದಲ ಹೆಸರು ಮಯೂರಶರ್ಮ. ಈತ ಬ್ರಾಹ್ಮಣನಾಗಿದ್ದು, ವೇದಗಳನ್ನು ಓದಿ "ವೇದಾಂಗ ವಿದ್ಯಾವಿಶಾರದ" ಎಂಬ ಬಿರುದನ್ನು ಪಡೆದಿದ್ದನು. ಇವನು ಉನ್ನತ ವ್ಯಾಸಂಗಕ್ಕಾಗಿ ತನ್ನ ಅಜ್ಜನಾದ ವೀರಶರ್ಮನೊಂದಿಗೆ ಕಂಚಿ ಪ್ರದೇಶಕ್ಕೆ ತೆರಳಿದ್ದನು. ಕಂಚಿ ಆಗಿನ ಕಾಲದಲ್ಲಿ "ಘಟಿಕಾ ಸ್ಥಾನ" (ಉನ್ನತ ಶಿಕ್ಷಣ ಕೇಂದ್ರ) ಆಗಿತ್ತು. ಮಯೂರಶರ್ಮನು ಪಲ್ಲವರ ಅಶ್ವ ಸಂಸ್ಥೆಯಿಂದ ಅವಮಾನಗೊಂಡು ಬ್ರಾಹ್ಮಣತ್ವವನ್ನು ಬಿಟ್ಟು ಕ್ಷತ್ರಿಯ ಧರ್ಮವನ್ನು ಪಾಲಿಸಿ ಮಯೂರವರ್ಮ ಆದನು. ಪಲ್ಲವರ ಸಾಮಂತ ದೊರೆಗಳಾದ ಬೃಹತ ಬಾಣರನ್ನು ಸೋಲಿಸಿದನು. ಇವನು ಉತ್ತರ ಪ್ರದೇಶದ ಅಹಿಚ್ಚಿದ ಬ್ರಾಹ್ಮಣರನ್ನು ಕರೆತಂದು ತಾಳಗುಂದದಲ್ಲಿ 144 ಗ್ರಾಮಗಳನ್ನು ದಾನವಾಗಿ ನೀಡಿದನು. ಇವುಗಳನ್ನು "ಅಗ್ರಹಾರಗಳು" ಎಂದು ಕರೆಯಲಾಗುತ್ತಿತ್ತು. ಮಯೂರವರ್ಮನು ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ನಿರ್ಮಿಸಿದನು.

  • ಭಾಗೀರಥ ವರ್ಮ (390-415): ಈತನ ತಂದೆ ಕಂಗವರ್ಮ ಅಧಿಕಾರವನ್ನು ಕಳೆದುಕೊಂಡಾಗ ಈತನ ಜನನವಾಯಿತು. ಆದ್ದರಿಂದ ಈತನನ್ನು "ಕದಂಬಕುಲ ಪ್ರಚ್ಚನ್ನ ಜನ್ಮ" ಎಂದು ಕರೆಯಲಾಗುತ್ತದೆ.

  • ಕಾಕುತ್ಸವರ್ಮ (435-455): ಈತ ಮಯೂರವರ್ಮನ ನಂತರ ಅತಿ ಪ್ರಬಲವಾಗಿ ಆಳ್ವಿಕೆ ನಡೆಸಿದ ಕದಂಬ ದೊರೆ. ಇವನನ್ನು "ಕದಂಬರ ಅನಘ್ರ್ಯ ರತ್ನ", "ಕದಂಬ ಕುಲಭೂಷಣ" ಮತ್ತು "ಕದಂಬರ ನೃಪತಿ" ಎಂದು ಉಲ್ಲೇಖಿಸಲಾಗಿದೆ. ಇವನ ವಿದೇಶಾಂಗ ನೀತಿಯು ತನ್ನ ಐದು ಜನ ಹೆಣ್ಣು ಮಕ್ಕಳನ್ನು ಐದು ಬೇರೆ ಬೇರೆ ರಾಜಮನೆತನಗಳಿಗೆ ಮದುವೆ ಮಾಡಿಕೊಡುವುದು. ತಾಳಗುಂದ ಶಾಸನವು ಇವನ ಸಾಧನೆಗಳ ಬಗ್ಗೆ ತಿಳಿಸುತ್ತದೆ. ಪ್ರಸಿದ್ಧ ಕವಿಯಾದ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ನೀಡಿದ್ದನು ಎಂದು ಹೇಳಲಾಗುತ್ತದೆ.

  • ಶಾಂತಿ ವರ್ಮ (455-460): ಇವನ ಬಿರುದುಗಳು "ಧರ್ಮ ಮಹಾರಾಜ" ಮತ್ತು "ಸಮಗ್ರ ಕರ್ನಾಟಕ ದೇವ ಭೂಗಮ ಬತ್ತಾರ".

  • ಮೃಗೇಶ ವರ್ಮ (460-480): ಇವನು ಹಲಸಿಯಲ್ಲಿ ಒಂದು ಜೈನ ಮಂದಿರವನ್ನು ನಿರ್ಮಿಸಿದನು. ಇವನ ರಾಜಧಾನಿಗಳು ಬನವಾಸಿ ಮತ್ತು ಹಲಸಿ.

  • ರವಿವರ್ಮ (480-519): ಈತ ಅತಿ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಕದಂಬ ದೊರೆ. ಇವನು ಜೈನ ಮತಾವಲಂಬಿಯಾಗಿದ್ದು, ಕಾರ್ತೀಕ ಮಾಸದಲ್ಲಿ "ಜೈನೇಂದ್ರ ಉತ್ಸವ"ವನ್ನು ಪ್ರಾರಂಭಿಸಿದನು.

  • 2ನೇ ಕೃಷ್ಣ ವರ್ಮ: ಈತ ಕದಂಬ ಸಾಮ್ರಾಜ್ಯದ ಕೊನೆಯ ದೊರೆ. ಇವನನ್ನು ಜಯಸಿಂಹನು ಸೋಲಿಸಿ ಬಾದಾಮಿ ಚಾಲುಕ್ಯರ ಆಡಳಿತವನ್ನು ಆರಂಭಿಸಿದನು.

ಆಡಳಿತ ವ್ಯವಸ್ಥೆ

  • ಆಡಳಿತವು ವಂಶಪಾರಂಪರ್ಯವಾಗಿತ್ತು.

  • ಮಂತ್ರಿಮಂಡಲದ ವ್ಯವಸ್ಥೆ:

    • ಪರುಪ್ರತಾರ: ಅರಮನೆಯ ಆದಾಯ ಮತ್ತು ವೆಚ್ಚವನ್ನು ನೋಡಿಕೊಳ್ಳುವ ಮಂತ್ರಿ.

    • ತಂತ್ರಪಾಲ: ವಿದೇಶಾಂಗ ಮಂತ್ರಿ.

    • ಕೋಶಾಧಿಕಾರ: ಹಣಕಾಸು ಮಂತ್ರಿ.

    • ತಾಂಬೂಲ ಪರುಪತಾರ: ಅರಮನೆಯ ಮೇಲ್ವಿಚಾರಕ.

  • ಪ್ರಾಂತ್ಯಾಡಳಿತ: ಸಾಮ್ರಾಜ್ಯ (ರಾಜ) → ದೇವ/ಮಂಡಲ (ಪ್ರಾಂತ್ಯ) → ವಿಷಯ (ಜಿಲ್ಲೆ) → ದವಗ್ರಾಮ (ಗ್ರಾಮ).

ಆರ್ಥಿಕ ವ್ಯವಸ್ಥೆ

  • ಭೂಕಂದಾಯ ಪ್ರಮುಖವಾದ ಆದಾಯವಾಗಿತ್ತು. ಇದು 1/6 ಇತ್ತು.

  • ಭೂಕಂದಾಯ ಸಂಗ್ರಹಿಸುವ ಅಧಿಕಾರಗಳನ್ನು "ರಜ್ಜುಕರ" ಎಂದು ಕರೆಯುತ್ತಿದ್ದರು.

  • ಪಜ್ಞಮಾಂಕ: ವಿವಿಧ ವಸ್ತುಗಳ ಮೇಲೆ ಹಾಕುವ ತೆರಿಗೆ.

  • ಪನ್ನಾಯ: ಸಂತೆಯ ಮೇಲಿನ ತೆರಿಗೆ.

  • ಬಿಲ್ಕಡೆ: ಮಾರಾಟದ ಮೇಲಿನ ತೆರಿಗೆ.

ಸಮಾಜ ಮತ್ತು ಧಾರ್ಮಿಕ ವ್ಯವಸ್ಥೆ

  • ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನಗಳು ಉನ್ನತವಾಗಿದ್ದವು. ಅವರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.

  • ಕದಂಬರು ಮೂಲತಃ ವೈದಿಕ ಮತಸ್ಥರು, ನಂತರ ಜೈನ ಮತಾವಲಂಬಿಗಳಾದರು.

  • ಮೃಗೇಶ ವರ್ಮನ ಪತ್ನಿ ಪ್ರತಿಭಾದೇವಿಯು ಪ್ರಣವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದಳು.

ಕಲೆ ಮತ್ತು ವಾಸ್ತುಶಿಲ್ಪ

  • ಕದಂಬರ ದೇವಾಲಯಗಳು ಹೆಚ್ಚಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿವೆ.

  • ಕೆಲವು ದೇವಾಲಯಗಳು ವಿಮಾನ ಶೈಲಿ ಅಥವಾ ಕದಂಬ ಶೈಲಿಯಲ್ಲಿವೆ.

  • ವಾಸ್ತುಶಿಲ್ಪದ ಲಕ್ಷಣಗಳು:

    • ದೇವಾಲಯಗಳು ಚೌಕಾಕಾರದ ತಳಪಾಯವನ್ನು ಹೊಂದಿವೆ.

    • ದೇವಾಲಯಗಳು ಪಿರಮಿಡ್ ಆಕಾರದ ರಚನೆಯನ್ನು ಹೊಂದಿವೆ.

  • ಉದಾಹರಣೆಗಳು:

    • ಹಲಸಿ: ಸತಿತಕೇಶ್ವರ, ಸುವರ್ಣೇಶ್ವರ, ಭುವರಾಸ, ರಾಮೇಶ್ವರ ದೇವಾಲಯಗಳು.

    • ಬನವಾಸಿ: ಮಧುಕೇಶ್ವರ ದೇವಾಲಯ.

    • ಹಾನಗಲ್: ತಾರಕೇಶ್ವರ ದೇವಾಲಯ.

    • ಬೈಲಹೊಂಗಲ: ಕಾದರೋಳಿ ದೇವಾಲಯ.

    • ಗೋವಾದ: ತಂಬಂಡಿಡಿ ಸುಲಮ ಮಸದೇವಿ ದೇವಾಲಯ.

    • ಕಾದರೋಳಿಯ ಶಂಕರ ದೇವಾಲಯವು ಶುದ್ಧ ಕದಂಬ ಅಥವಾ ವಿಮಾನ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ.

No comments:

Post a Comment

ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು

  ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು ೧. ಮೈಸೂರಿನ ಮಧುಸೂದನ್‌ಗೆ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ ವಿವರ: ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ...