ಬಾದಾಮಿಯ ಚಾಲುಕ್ಯರು (ಕ್ರಿ.ಶ 500-757)
ಇವರನ್ನು ಪಶ್ಚಿಮದ ಚಾಲುಕ್ಯರು ಎಂದೂ ಕರೆಯುತ್ತಾರೆ
. ಸ್ಥಾಪಕ: ಜಯಸಿಂಹ
. ರಾಜಧಾನಿ: ಐಹೊಳೆ ಮತ್ತು ಬಾದಾಮಿ (ವಾತಾಪಿ)
. ಲಾಂಛನ: ವರಾಹ (ಬಲಮುಖ)
. ಆಡಳಿತ ಭಾಷೆ: ಸಂಸ್ಕೃತ ಮತ್ತು ಕನ್ನಡ
. ವಾಸ್ತುಶಿಲ್ಪ ಶೈಲಿ: ವೇಸರ / ಚಾಲುಕ್ಯ / ಕರ್ನಾಟಕ ಶೈಲಿ (ದ್ರಾವಿಡ + ನಾಗರ ಶೈಲಿ)
. ಮೂಲಾಧಾರಗಳು: ಐಹೊಳೆ ಶಾಸನ, ಬಾದಾಮಿ ಬಂಡೆಗಲ್ಲು ಶಾಸನ, ಮಹಾಕೂಟ ಸ್ತಂಭ ಶಾಸನ, ಹೈದರಾಬಾದ್ ತಾಮ್ರಪಟ ಶಾಸನಗಳು
.
ಪ್ರಮುಖ ಅರಸರು
ಜಯಸಿಂಹ (ಕ್ರಿ.ಶ 500-520): ಇವನು ಬಾದಾಮಿ ಚಾಲುಕ್ಯರ ಸ್ಥಾಪಕ ದೊರೆ
. ಈತ ಕದಂಬರ ಸಾಮಂತನಾಗಿದ್ದ . ಇವನು ಕದಂಬರ ಕೊನೆಯ ದೊರೆ ಎರಡನೇ ಕೃಷ್ಣವರ್ಮನನ್ನು ಸೋಲಿಸಿ ಈ ಮನೆತನವನ್ನು ಪ್ರಾರಂಭಿಸಿದ . ಈತನ ಬಿರುದುಗಳು ವಲ್ಲಭ, ವಲ್ಲಭೇಂದ್ರ ಮತ್ತು ವಲ್ಲಭರಾಜ . ಒಂದನೇ ಪುಲಕೇಶಿ (ಕ್ರಿ.ಶ 540-566): ಇವನನ್ನು ಬಾದಾಮಿ ಚಾಲುಕ್ಯರ ನಿಜವಾದ ಸ್ಥಾಪಕ ಎಂದು ಪರಿಗಣಿಸಲಾಗಿದೆ
. ಇವನು ಬಾದಾಮಿ ಕೋಟೆಯನ್ನು ನಿರ್ಮಿಸಿ ಅದನ್ನು ಶಾಶ್ವತ ರಾಜಧಾನಿಯನ್ನಾಗಿ ಮಾಡಿದ . ಕದಂಬರ ಎರಡನೇ ಕೃಷ್ಣವರ್ಮನನ್ನು ಸಂಪೂರ್ಣವಾಗಿ ಸೋಲಿಸಿ ಬನವಾಸಿಯನ್ನು ಬಾದಾಮಿಯೊಂದಿಗೆ ವಿಲೀನಗೊಳಿಸಿದ . ಈತ ಅಶ್ವಮೇಧ ಯಾಗವನ್ನು ಕೈಗೊಂಡಿದ್ದನು . ಇವನ ಬಿರುದುಗಳು: ಶ್ರೀವಲ್ಲಭ, ಶ್ರೀ ಪೃಥ್ವಿ ವಲ್ಲಭ, ಮತ್ತು ಪರಮಭಾಗವತ . ಒಂದನೇ ಕೀರ್ತಿವರ್ಮ (ಕ್ರಿ.ಶ 566-596): ಈತನ ಬಿರುದುಗಳು ಕೀರ್ತಿರಾಜ, ಮತ್ತು ಕತ್ತಿಯರಸ
. ಇವನು ಬಾದಾಮಿಯಲ್ಲಿ ವಿಷ್ಣು ಗುಹಾಲಯಗಳ ನಿರ್ಮಾಣವನ್ನು ಪ್ರಾರಂಭಿಸಿದ . ನೋಳಂಬರ, ಶಿಲಾಹಾರ, ಕದಂಬ ಮತ್ತು ಅಳುಪರನ್ನೂ ಸೋಲಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದ . ಇವನ ಮಕ್ಕಳು ಅಪ್ರಾಪ್ತರಾಗಿದ್ದರಿಂದ ಇವನ ಸಹೋದರ ಮಂಗಳೇಶನು ಅಧಿಕಾರಕ್ಕೆ ಬಂದನು . ಮಂಗಳೇಶ (ಕ್ರಿ.ಶ 596-609): ಇವನು ಕ್ರಿ.ಶ 602ರಲ್ಲಿ ಕಳಚೂರಿ ಅರಸ ಬುದ್ಧರಾಜನನ್ನು ಸೋಲಿಸಿ ವಿಜಯದ ಸ್ಮರಣೆಗಾಗಿ ಮಹಾಕೂಟ ದೇವಾಲಯಗಳನ್ನು ನಿರ್ಮಿಸಿದ
. ಈತ ಬಾದಾಮಿಯಲ್ಲಿ ಅತಿ ದೊಡ್ಡ ಮೂರನೇ ಗುಹೆಯಾದ ವೈಷ್ಣವ ಗುಹೆಯನ್ನು ನಿರ್ಮಿಸಿದನು . ಇವನನ್ನು ಬಾದಾಮಿ ಚಾಲುಕ್ಯರ "ವಾಸ್ತುಶಿಲ್ಪದ ಕರ್ತೃ" ಎಂದು ಕರೆಯಲಾಗುತ್ತದೆ . ಇಮ್ಮಡಿ ಪುಲಕೇಶಿ (ಕ್ರಿ.ಶ 609-642): ಇವನು ಬಾದಾಮಿ ಚಾಲುಕ್ಯರ ಪ್ರಮುಖ ಅರಸ
. ಕ್ರಿ.ಶ 634ರಲ್ಲಿ ನರ್ಮದಾ ಕದನದಲ್ಲಿ ಉತ್ತರಪಥೇಶ್ವರನಾದ ಹರ್ಷವರ್ಧನನ್ನು ಸೋಲಿಸಿ "ಪರಮೇಶ್ವರ" ಎಂಬ ಬಿರುದನ್ನು ಪಡೆದ . ಈತ ಪುಲ್ಲಲೂರು ಕದನದಲ್ಲಿ ಪಲ್ಲವ ದೊರೆ ಒಂದನೇ ಮಹೇಂದ್ರವರ್ಮನನ್ನು ಸೋಲಿಸಿದನು . ಇವನನ್ನು ಒಂದನೇ ನರಸಿಂಹವರ್ಮನು ಸೋಲಿಸಿ "ವಾತಾಪಿಕೊಂಡ" ಎಂಬ ಬಿರುದನ್ನು ಪಡೆದನು . ಒಂದನೇ ವಿಕ್ರಮಾದಿತ್ಯ (ಕ್ರಿ.ಶ 655-681): ಇವನು ಪಲ್ಲವ ದೊರೆಗಳಾದ ಒಂದನೇ ನರಸಿಂಹವರ್ಮ, ಒಂದನೇ ಪರಮೇಶ್ವರ ವರ್ಮ, ಮತ್ತು ಎರಡನೇ ಮಹೇಂದ್ರವರ್ಮನನ್ನು ಸೋಲಿಸಿದ
. ಇವನು ಬಾದಾಮಿಯನ್ನು ಪುನಃ ವಶಪಡಿಸಿಕೊಂಡು "ಬಾದಾಮಿಯ ವಿಮೋಚಕ" ಮತ್ತು "ರಣರಸಕ" ಎಂಬ ಬಿರುದುಗಳನ್ನು ಪಡೆದ . ವಿಜಯಾದಿತ್ಯ (ಕ್ರಿ.ಶ 696-733): ಇವನು ಪಟ್ಟದಕಲ್ಲಿನಲ್ಲಿ ಸಂಗಮೇಶ್ವರ ದೇವಾಲಯವನ್ನು ನಿರ್ಮಿಸಿದ
. ಎರಡನೇ ವಿಕ್ರಮಾದಿತ್ಯ (ಕ್ರಿ.ಶ 733-745): ಇವನ ಕಾಲದಲ್ಲಿ ಚಾಲುಕ್ಯ-ಪಲ್ಲವ ಸಂಘರ್ಷಗಳು ತೀವ್ರಗೊಂಡವು
. ಇವನ ವಿಜಯದ ನೆನಪಿಗಾಗಿ ಇವನ ಪತ್ನಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯಗಳನ್ನು ನಿರ್ಮಿಸಿದರು . ಎರಡನೇ ಕೀರ್ತಿವರ್ಮ (ಕ್ರಿ.ಶ 745-757): ಇವನು ಬಾದಾಮಿ ಚಾಲುಕ್ಯರ ಕೊನೆಯ ದೊರೆ
. ಇವನನ್ನು ರಾಷ್ಟ್ರಕೂಟ ದೊರೆ ದಂತಿದುರ್ಗನು ಸೋಲಿಸಿ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸ್ಥಾಪಿಸಿದನು .
ಕಲೆ ಮತ್ತು ವಾಸ್ತುಶಿಲ್ಪ
ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ಕೇಂದ್ರಗಳು: ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು
. ಇವರ ಆರಂಭಿಕ ನಿರ್ಮಾಣಗಳು ಬಂಡೆಗಳನ್ನು ಕೆತ್ತಿ ಮಾಡಿದ ಗುಹಾಂತರ ದೇವಾಲಯಗಳು
. ಬಾದಾಮಿಯಲ್ಲಿ ನಾಲ್ಕು ಗುಹೆಗಳಿವೆ - ಮೊದಲನೆಯದು ಶೈವ, ಎರಡನೆಯದು ವೈಷ್ಣವ, ಮೂರನೆಯದು ವೈಷ್ಣವ ಮತ್ತು ನಾಲ್ಕನೆಯದು ಜೈನ . ಇವರು ವೇಸರ ಶೈಲಿಯನ್ನು ಪರಿಚಯಿಸಿದರು
. ಐಹೊಳೆಯಲ್ಲಿ 150ಕ್ಕೂ ಹೆಚ್ಚು ದೇವಾಲಯಗಳಿವೆ
. ಇದನ್ನು "ಭಾರತದ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು" ಎಂದು ಕರೆಯಲಾಗುತ್ತದೆ
. ಇಲ್ಲಿನ ದುರ್ಗಾ ದೇವಾಲಯವು ಅರ್ಧವೃತ್ತಾಕಾರದ ರಚನೆಯನ್ನು ಹೊಂದಿದೆ . ಪಟ್ಟದಕಲ್ಲು 1987ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿದೆ
. ಇಲ್ಲಿ ದ್ರಾವಿಡ ಮತ್ತು ನಾಗರ ಶೈಲಿಯ ದೇವಾಲಯಗಳನ್ನು ಕಾಣಬಹುದು .

No comments:
Post a Comment