Sunday, August 17, 2025

ಬಾದಾಮಿಯ ಚಾಲುಕ್ಯರು (ಕ್ರಿ.ಶ 500-757)

 

ಬಾದಾಮಿಯ ಚಾಲುಕ್ಯರು (ಕ್ರಿ.ಶ 500-757)

  • ಇವರನ್ನು ಪಶ್ಚಿಮದ ಚಾಲುಕ್ಯರು ಎಂದೂ ಕರೆಯುತ್ತಾರೆ.

  • ಸ್ಥಾಪಕ: ಜಯಸಿಂಹ.

  • ರಾಜಧಾನಿ: ಐಹೊಳೆ ಮತ್ತು ಬಾದಾಮಿ (ವಾತಾಪಿ).

  • ಲಾಂಛನ: ವರಾಹ (ಬಲಮುಖ).

  • ಆಡಳಿತ ಭಾಷೆ: ಸಂಸ್ಕೃತ ಮತ್ತು ಕನ್ನಡ.

  • ವಾಸ್ತುಶಿಲ್ಪ ಶೈಲಿ: ವೇಸರ / ಚಾಲುಕ್ಯ / ಕರ್ನಾಟಕ ಶೈಲಿ (ದ್ರಾವಿಡ + ನಾಗರ ಶೈಲಿ).

  • ಮೂಲಾಧಾರಗಳು: ಐಹೊಳೆ ಶಾಸನ, ಬಾದಾಮಿ ಬಂಡೆಗಲ್ಲು ಶಾಸನ, ಮಹಾಕೂಟ ಸ್ತಂಭ ಶಾಸನ, ಹೈದರಾಬಾದ್ ತಾಮ್ರಪಟ ಶಾಸನಗಳು.


ಪ್ರಮುಖ ಅರಸರು

  • ಜಯಸಿಂಹ (ಕ್ರಿ.ಶ 500-520): ಇವನು ಬಾದಾಮಿ ಚಾಲುಕ್ಯರ ಸ್ಥಾಪಕ ದೊರೆ. ಈತ ಕದಂಬರ ಸಾಮಂತನಾಗಿದ್ದ. ಇವನು ಕದಂಬರ ಕೊನೆಯ ದೊರೆ ಎರಡನೇ ಕೃಷ್ಣವರ್ಮನನ್ನು ಸೋಲಿಸಿ ಈ ಮನೆತನವನ್ನು ಪ್ರಾರಂಭಿಸಿದ. ಈತನ ಬಿರುದುಗಳು ವಲ್ಲಭ, ವಲ್ಲಭೇಂದ್ರ ಮತ್ತು ವಲ್ಲಭರಾಜ.

  • ಒಂದನೇ ಪುಲಕೇಶಿ (ಕ್ರಿ.ಶ 540-566): ಇವನನ್ನು ಬಾದಾಮಿ ಚಾಲುಕ್ಯರ ನಿಜವಾದ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಇವನು ಬಾದಾಮಿ ಕೋಟೆಯನ್ನು ನಿರ್ಮಿಸಿ ಅದನ್ನು ಶಾಶ್ವತ ರಾಜಧಾನಿಯನ್ನಾಗಿ ಮಾಡಿದ. ಕದಂಬರ ಎರಡನೇ ಕೃಷ್ಣವರ್ಮನನ್ನು ಸಂಪೂರ್ಣವಾಗಿ ಸೋಲಿಸಿ ಬನವಾಸಿಯನ್ನು ಬಾದಾಮಿಯೊಂದಿಗೆ ವಿಲೀನಗೊಳಿಸಿದ. ಈತ ಅಶ್ವಮೇಧ ಯಾಗವನ್ನು ಕೈಗೊಂಡಿದ್ದನು. ಇವನ ಬಿರುದುಗಳು: ಶ್ರೀವಲ್ಲಭ, ಶ್ರೀ ಪೃಥ್ವಿ ವಲ್ಲಭ, ಮತ್ತು ಪರಮಭಾಗವತ.

  • ಒಂದನೇ ಕೀರ್ತಿವರ್ಮ (ಕ್ರಿ.ಶ 566-596): ಈತನ ಬಿರುದುಗಳು ಕೀರ್ತಿರಾಜ, ಮತ್ತು ಕತ್ತಿಯರಸ. ಇವನು ಬಾದಾಮಿಯಲ್ಲಿ ವಿಷ್ಣು ಗುಹಾಲಯಗಳ ನಿರ್ಮಾಣವನ್ನು ಪ್ರಾರಂಭಿಸಿದ. ನೋಳಂಬರ, ಶಿಲಾಹಾರ, ಕದಂಬ ಮತ್ತು ಅಳುಪರನ್ನೂ ಸೋಲಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದ. ಇವನ ಮಕ್ಕಳು ಅಪ್ರಾಪ್ತರಾಗಿದ್ದರಿಂದ ಇವನ ಸಹೋದರ ಮಂಗಳೇಶನು ಅಧಿಕಾರಕ್ಕೆ ಬಂದನು.

  • ಮಂಗಳೇಶ (ಕ್ರಿ.ಶ 596-609): ಇವನು ಕ್ರಿ.ಶ 602ರಲ್ಲಿ ಕಳಚೂರಿ ಅರಸ ಬುದ್ಧರಾಜನನ್ನು ಸೋಲಿಸಿ ವಿಜಯದ ಸ್ಮರಣೆಗಾಗಿ ಮಹಾಕೂಟ ದೇವಾಲಯಗಳನ್ನು ನಿರ್ಮಿಸಿದ. ಈತ ಬಾದಾಮಿಯಲ್ಲಿ ಅತಿ ದೊಡ್ಡ ಮೂರನೇ ಗುಹೆಯಾದ ವೈಷ್ಣವ ಗುಹೆಯನ್ನು ನಿರ್ಮಿಸಿದನು. ಇವನನ್ನು ಬಾದಾಮಿ ಚಾಲುಕ್ಯರ "ವಾಸ್ತುಶಿಲ್ಪದ ಕರ್ತೃ" ಎಂದು ಕರೆಯಲಾಗುತ್ತದೆ.

  • ಇಮ್ಮಡಿ ಪುಲಕೇಶಿ (ಕ್ರಿ.ಶ 609-642): ಇವನು ಬಾದಾಮಿ ಚಾಲುಕ್ಯರ ಪ್ರಮುಖ ಅರಸ. ಕ್ರಿ.ಶ 634ರಲ್ಲಿ ನರ್ಮದಾ ಕದನದಲ್ಲಿ ಉತ್ತರಪಥೇಶ್ವರನಾದ ಹರ್ಷವರ್ಧನನ್ನು ಸೋಲಿಸಿ "ಪರಮೇಶ್ವರ" ಎಂಬ ಬಿರುದನ್ನು ಪಡೆದ. ಈತ ಪುಲ್ಲಲೂರು ಕದನದಲ್ಲಿ ಪಲ್ಲವ ದೊರೆ ಒಂದನೇ ಮಹೇಂದ್ರವರ್ಮನನ್ನು ಸೋಲಿಸಿದನು. ಇವನನ್ನು ಒಂದನೇ ನರಸಿಂಹವರ್ಮನು ಸೋಲಿಸಿ "ವಾತಾಪಿಕೊಂಡ" ಎಂಬ ಬಿರುದನ್ನು ಪಡೆದನು.

  • ಒಂದನೇ ವಿಕ್ರಮಾದಿತ್ಯ (ಕ್ರಿ.ಶ 655-681): ಇವನು ಪಲ್ಲವ ದೊರೆಗಳಾದ ಒಂದನೇ ನರಸಿಂಹವರ್ಮ, ಒಂದನೇ ಪರಮೇಶ್ವರ ವರ್ಮ, ಮತ್ತು ಎರಡನೇ ಮಹೇಂದ್ರವರ್ಮನನ್ನು ಸೋಲಿಸಿದ. ಇವನು ಬಾದಾಮಿಯನ್ನು ಪುನಃ ವಶಪಡಿಸಿಕೊಂಡು "ಬಾದಾಮಿಯ ವಿಮೋಚಕ" ಮತ್ತು "ರಣರಸಕ" ಎಂಬ ಬಿರುದುಗಳನ್ನು ಪಡೆದ.

  • ವಿಜಯಾದಿತ್ಯ (ಕ್ರಿ.ಶ 696-733): ಇವನು ಪಟ್ಟದಕಲ್ಲಿನಲ್ಲಿ ಸಂಗಮೇಶ್ವರ ದೇವಾಲಯವನ್ನು ನಿರ್ಮಿಸಿದ.

  • ಎರಡನೇ ವಿಕ್ರಮಾದಿತ್ಯ (ಕ್ರಿ.ಶ 733-745): ಇವನ ಕಾಲದಲ್ಲಿ ಚಾಲುಕ್ಯ-ಪಲ್ಲವ ಸಂಘರ್ಷಗಳು ತೀವ್ರಗೊಂಡವು. ಇವನ ವಿಜಯದ ನೆನಪಿಗಾಗಿ ಇವನ ಪತ್ನಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯಗಳನ್ನು ನಿರ್ಮಿಸಿದರು.

  • ಎರಡನೇ ಕೀರ್ತಿವರ್ಮ (ಕ್ರಿ.ಶ 745-757): ಇವನು ಬಾದಾಮಿ ಚಾಲುಕ್ಯರ ಕೊನೆಯ ದೊರೆ. ಇವನನ್ನು ರಾಷ್ಟ್ರಕೂಟ ದೊರೆ ದಂತಿದುರ್ಗನು ಸೋಲಿಸಿ ರಾಷ್ಟ್ರಕೂಟ ಸಾಮ್ರಾಜ್ಯವನ್ನು ಸ್ಥಾಪಿಸಿದನು.


ಕಲೆ ಮತ್ತು ವಾಸ್ತುಶಿಲ್ಪ

  • ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ಕೇಂದ್ರಗಳು: ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು.

  • ಇವರ ಆರಂಭಿಕ ನಿರ್ಮಾಣಗಳು ಬಂಡೆಗಳನ್ನು ಕೆತ್ತಿ ಮಾಡಿದ ಗುಹಾಂತರ ದೇವಾಲಯಗಳು. ಬಾದಾಮಿಯಲ್ಲಿ ನಾಲ್ಕು ಗುಹೆಗಳಿವೆ - ಮೊದಲನೆಯದು ಶೈವ, ಎರಡನೆಯದು ವೈಷ್ಣವ, ಮೂರನೆಯದು ವೈಷ್ಣವ ಮತ್ತು ನಾಲ್ಕನೆಯದು ಜೈನ.

  • ಇವರು ವೇಸರ ಶೈಲಿಯನ್ನು ಪರಿಚಯಿಸಿದರು.

  • ಐಹೊಳೆಯಲ್ಲಿ 150ಕ್ಕೂ ಹೆಚ್ಚು ದೇವಾಲಯಗಳಿವೆ. ಇದನ್ನು

    "ಭಾರತದ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು" ಎಂದು ಕರೆಯಲಾಗುತ್ತದೆ. ಇಲ್ಲಿನ ದುರ್ಗಾ ದೇವಾಲಯವು ಅರ್ಧವೃತ್ತಾಕಾರದ ರಚನೆಯನ್ನು ಹೊಂದಿದೆ.

  • ಪಟ್ಟದಕಲ್ಲು 1987ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟಿದೆ. ಇಲ್ಲಿ ದ್ರಾವಿಡ ಮತ್ತು ನಾಗರ ಶೈಲಿಯ ದೇವಾಲಯಗಳನ್ನು ಕಾಣಬಹುದು.

No comments:

Post a Comment

ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು

  ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು ೧. ಮೈಸೂರಿನ ಮಧುಸೂದನ್‌ಗೆ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ ವಿವರ: ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ...