ತಲಕಾಡಿನ ಗಂಗರು (ಪಶ್ಚಿಮ ಗಂಗರು : 350 - 999)
ಸ್ಥಾಪಕರು: ದಡಿಗ ಮತ್ತು ಮಾಧವ
. ರಾಜಧಾನಿಗಳು: ಕೋಲಾರ (ಕುವಲಾಲ), ತಲಕಾಡು (ತವಲನ ಪುರ), ಮಾಕುಂದ (ಚನ್ನಪಟ್ಟಣ ಬಳಿ) ಮತ್ತು ಮಣ್ಣೆ (ಬೆಂಗಳೂರು)
. ಲಾಂಛನ: ಮದಗಜ
. ಗುರುಗಳು: ಸಿಂಹನಂದಿ ಗುರುಗಳು
. ಪರಿಚಯ: ಕರ್ನಾಟಕದಲ್ಲಿ ಅತಿ ದೀರ್ಘಕಾಲ ಆಳ್ವಿಕೆ ಮಾಡಿದ ರಾಜಮನೆತನ ಇವರಾಗಿದ್ದಾರೆ, ಸುಮಾರು 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ
. ಇವರು ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರ ಸಾಮಂತ ದೊರೆಗಳಾಗಿದ್ದರು .
ಪ್ರಮುಖ ಅರಸರು
ಕೊಂಗಣಿವರ್ಮ (ದಡಿಗ) (350-400): ಈತನು ಸ್ಥಾಪಕ ದೊರೆ. ಹಲವಾರು ತಮಿಳು ಶಾಸನಗಳು ಈತನನ್ನು 'ಕೊಂಗಣಿವರ್ಮ' ಎಂದು ಉಲ್ಲೇಖಿಸಿವೆ
. ಇವನ ಗುರು ಸಿಂಹನಂದಿ . ಈತನು 'ಬಾಣವಂಶ ವನದಾವನಲ' ಎಂಬ ಬಿರುದನ್ನು ಹೊಂದಿದ್ದ . ಒಂದನೇ ಮಾಧವ (400-440): ಈತನು 'ದತ್ತಕ ಸೂತ್ರ ಭಾಷ್ಯ' ಎಂಬ ಕೃತಿಯನ್ನು ಬರೆದನು
. ಮುಮ್ಮಡಿ ಅಯ್ಯವರ್ಮ (469-529): ಇವನು ವಿಜಯ ಕೀರ್ತಿ ಗುರುಗಳ ಶಿಷ್ಯ. ಇವನು ಕೋಲಾರದಿಂದ ತಲಕಾಡಿಗೆ ರಾಜಧಾನಿಯನ್ನು ವರ್ಗಾಯಿಸಿದ
. ದುರ್ವಿನೀತ (529-579): ಇವನು ವಿದ್ವಾಂಸನಾಗಿದ್ದನು
. ಭಾರವಿಯ 'ಕಿರಾತಾರ್ಜುನೀಯ' ಗ್ರಂಥದ ಮೇಲೆ ಕೆಲವು ಟೀಕೆಗಳನ್ನು ಬರೆದನು . ಶ್ರೀ ವಿಜಯನು ತನ್ನ 'ಕವಿರಾಜ ಮಾರ್ಗ' ಗ್ರಂಥದಲ್ಲಿ ಇವನು ಕನ್ನಡ ಮತ್ತು ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದನು ಎಂದು ಉಲ್ಲೇಖಿಸಿದ್ದಾನೆ . ಭೂ ವಿಕ್ರಮ (635-679): ಈತನ ರಾಜಧಾನಿ ಮಾಕುಂದ
. ಶ್ರೀ ಪುರುಷ (726-788): ಈತನ ರಾಜಧಾನಿ ಮಣ್ಣೆ
. ಈತನು ಸಂಸ್ಕೃತದಲ್ಲಿ 'ಗಜಶಾಸ್ತ್ರ' ಎಂಬ ಗ್ರಂಥವನ್ನು ಬರೆದನು . ಇವನು 'ಪೆರ್ಮಾಡಿ', 'ರಾಜ ಕೇಸರಿ', 'ಭೀಮಕೊಪ' ಮತ್ತು 'ರಣಭಾಜನ' ಎಂಬ ಬಿರುದುಗಳನ್ನು ಹೊಂದಿದ್ದನು . ಎರಡನೇ ಶಿವಮಾರ (788-816): ಈತನ ಗುರುಗಳು ಪುಷ್ಪದಂತ
. ಈತನು 'ಗಜಾಷ್ಟಕ' ಮತ್ತು 'ಸೇತುಬಂಧ' ಎಂಬ ಕೃತಿಗಳನ್ನು ಬರೆದನು . ಒಂದನೇ ನೀತಿ ಮಾರ್ಗ (843-870): ಈತನ ಕಾಲದಲ್ಲಿ ಗರುಡ ಪದ್ಧತಿ ಆಚರಣೆಗೆ ಬಂದಿತು
. ಎರಡನೇ ಭೂತುಗ (938-961): ಈತನ ಕಾಲದಲ್ಲಿ 949ರಲ್ಲಿ ಪ್ರಸಿದ್ಧವಾದ 'ತಕ್ಕೋಳಂ ಕದನ' ನಡೆಯಿತು
. ಈತನು 'ಸತ್ಯ ವಾಕ್ಯ' ಮತ್ತು 'ಗಂಗಾಗಾಂಗೆಯ' ಎಂಬ ಬಿರುದುಗಳನ್ನು ಹೊಂದಿದ್ದನು . ಚಾವುಂಡರಾಯ: ಈತನು ಮಾರಸಿಂಹ, 4ನೇ ರಾಚಮಲ್ಲ ಮತ್ತು 5ನೇ ರಕ್ಕಸ ಗಂಗನ ಕಾಲದಲ್ಲಿ ಮಂತ್ರಿಯಾಗಿದ್ದನು
. ಈತನು ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ವಿಗ್ರಹವನ್ನು ಪ್ರತಿಷ್ಠಾಪಿಸಿದನು . ಈತನು 'ಚಾವುಂಡರಾಯ ಪುರಾಣ' (ತ್ರೀಶಷ್ಠಿ ಲಕ್ಷಣ ಪುರಾಣ) ಎಂಬ ಕೃತಿಯನ್ನು ಕನ್ನಡದಲ್ಲಿ ಮತ್ತು 'ಚರಿತ್ರ ಸಾರ' ಎಂಬ ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದ್ದಾನೆ .
ಆಡಳಿತ ಮತ್ತು ಆರ್ಥಿಕತೆ
ಆಡಳಿತವು ವಂಶಪಾರಂಪರ್ಯವಾಗಿತ್ತು
. ರಾಜನಿಗೆ ಸಹಾಯ ಮಾಡಲು ಮಂತ್ರಿಮಂಡಲವಿತ್ತು
. ಪ್ರಾಂತೀಯ ಆಡಳಿತವು ಸಾಮ್ರಾಜ್ಯ, ನಾಡು (ಪ್ರಾಂತ), ವಿಷಯ (ಜಿಲ್ಲೆ) ಮತ್ತು ಕಂಪಣ (ಗ್ರಾಮ) ಎಂದು ವಿಂಗಡಿಸಲಾಗಿತ್ತು
. ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನಮಾನವಿತ್ತು ಮತ್ತು ಅವರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು
. ಭೂಕಂದಾಯವು ಪ್ರಮುಖ ಆದಾಯದ ಮೂಲವಾಗಿತ್ತು
. ಭೂಮಿಯನ್ನು ಅಳೆಯಲು ಗಂಗಕೋಲು ಮತ್ತು ಬೃಹತ್ಕೋಲು ಎಂಬ ಮಾಪನಗಳನ್ನು ಬಳಸುತ್ತಿದ್ದರು . ಸೈನಿಕ ವ್ಯವಸ್ಥೆಯಲ್ಲಿ ಗಜಸ್ಥಾನಿ (ಆನೆ) ಮತ್ತು ತುರಗಸ್ಥಾನಿ (ಕುದುರೆ) ಎಂಬ ಅಧಿಕಾರ ವರ್ಗಗಳಿದ್ದವು
.
ಕಲೆ ಮತ್ತು ವಾಸ್ತುಶಿಲ್ಪ
ಗಂಗರ ಕಾಲದ ದೇವಾಲಯಗಳು ದ್ರಾವಿಡ ಶೈಲಿಯಲ್ಲಿದ್ದವು
. ಇವರ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕಂಬದ ಬುಡದಲ್ಲಿ ಸಿಂಹದ ಆಕೃತಿಯನ್ನು ಕೆತ್ತಿರುವುದು
. ಉದಾಹರಣೆಗಳು:
ತಲಕಾಡಿನ ಪಾತಾಳೇಶ್ವರ/ಮರುಳೇಶ್ವರ ದೇವಾಲಯ
. ಬೆಂಗಳೂರಿನ ನಾಗೇಶ್ವರ ದೇವಾಲಯ
. ವರುಣಾದ ಮಹಾಲಿಂಗೇಶ್ವರ ದೇವಾಲಯ
. ಮಣ್ಣೆಯ ಕಪಿಲೇಶ್ವರ ದೇವಾಲಯ
.
ಅಪ್ಪರ್ ಗಂಗ ಶೈಲಿಯಲ್ಲಿ ನಿರ್ಮಾಣವಾದ ಗೋಪುರ ಕೋಲಾರದ ಕೋಲಾರಮ್ಮನ ಗೋಪುರ
.

No comments:
Post a Comment