Sunday, August 17, 2025

ರಾಷ್ಟ್ರಕೂಟ ವಂಶ

 

ರಾಷ್ಟ್ರಕೂಟ ವಂಶ

ಮಾನ್ಯಪೇಟದ ರಾಷ್ಟ್ರಕೂಟರು (753 - 973)

  • ಸ್ವಾಪಕ → ದಂತಿದುರ್ಗ
  • ರಾಜಧಾನಿ → ಮಾನ್ಯಪೇಟ (ಮಳಪೇಡ), ಕಲ್ಯಾಣಿ ಜಿಲ್ಲೆ, ಕಾಗಿಣಿ ನದಿ ದಂಡೆ ಮೇಲಿದೆ.
    • ಕಾಗಿಣಿ ನದಿ: ಭೀಮ ನದಿಯ ಉಪನದಿ, ಭೀಮ ನದಿಯ ಉಪನದಿಯು ಕೃಷ್ಣ.
  • ಲಾಂಛನ → ಗರುಡ

NOTE:

  • ಉತ್ತರ ಭಾರತದ ಗುಪ್ತ ಸಾಮ್ರಾಜ್ಯ ನಂತರ ಗರುಡವನ್ನು ಲಾಂಛನವಾಗಿ ಹೊಂದಿದ್ದವರು ರಾಷ್ಟ್ರಕೂಟರು.
  • ದಂತಿದುರ್ಗನ → ಸುಮನಗಡ ಶಾಸನ
  • ಒಂದನೇ ಕೃಷ್ಣನ ತಳ್ಳೀಗಾಂವ ಶಾಸನಗಳು (ಇವರ ಇತಿಹಾಸಕ್ಕೆ ಮೂಲಾಧಾರಗಳು)
  • ಇವರು ಮಹಾರಾಷ್ಟ್ರದ ಎಲ್ಲೋರಪುರದಿಂದ ಆಳ್ವಿಕೆ ಪ್ರಾರಂಭಿಸಿದರು. ಇವರು ಮಹಾರಾಷ್ಟ್ರದ ಲಟ್ಟಲೂರಿನಿಂದ (ಲಾತೂರ್) ಉಸ್ಮಾನಾಬಾದ್ ಜಿಲ್ಲೆ ಬಂದಿದ್ದರಿಂದ "ಲಟ್ಟಲೂರಿನ ಪುರವಾಧೀಶ್ವರರು" ಎಂದು ಕರೆಯುವರು.

ರಾಷ್ಟ್ರಕೂಟ ಅರಸರ ಪಟ್ಟಿ

ದಂತಿದುರ್ಗ735-756
ಒಂದನೇ ಕೃಷ್ಣ756-774
ಎರಡನೇ ಗೋವಿಂದ774-780
ಧ್ರುವ (ಗೋವಿಂದ ಮೂರನೇ)780-793
ಮೂರನೇ ಗೋವಿಂದ793-814
ಒಂದನೇ ಅಮೋಘವರ್ಷ ನೃಪತುಂಗ814-878
ಎರಡನೇ ಕೃಷ್ಣ878-914
ಜಗತ್ತುಂಗ914-929
ಮೂರನೇ ಇಂದ್ರ914-929
ಮೂರನೇ ಕೃಷ್ಣ938-967
ಖೋಟ್ಟಿಗ (ನಿರೂಪಮ)967-972
ಎರಡನೇ ಕರ್ಕ972-973

ದಂತಿದುರ್ಗ (735-756)

  • ರಾಷ್ಟ್ರಕೂಟರ ಸ್ಥಾಪಕ ದೊರೆ.
  • ತಂದೆ → ಎರಡನೇ ಇಂದ್ರ
  • ತಾಯಿ → ಭಾವನಾಗ (ಬಾದಾಮಿ ಚಾಲುಕ್ಯರ ವಂಶಸ್ಥೆ)
  • ಇವಳನ್ನು ಅಪಹರಿಸಿಕೊಂಡು ಬಂದು ಮದುವೆಯಾದ.
  • ಎರಡನೇ ಇಂದ್ರ ಬಾದಾಮಿ ಚಾಲುಕ್ಯರ ದೊರೆಯಾದ ಎರಡನೇ ವಿಕ್ರಮಾದಿತ್ಯನ ಸಾಮಂತ ದೊರೆಯಾಗಿ ಆಳ್ವಿಕೆ ಪ್ರಾರಂಭಿಸಿದ.
  • ದಂತಿದುರ್ಗ ಮಾನ್ಯಪೇಟವನ್ನು ರಾಜಧಾನಿ ಮಾಡಿಕೊಂಡು ಆಳ್ವಿಕೆ ಪ್ರಾರಂಭಿಸಿದ.
  • ಈತ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟರ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಬಿರುದುಗಳು:

  • ರಾಜ ಪರಮೇಶ್ವರ
  • ಮಹಾಮಂಡಲೇಶ್ವರ

ಒಂದನೇ ಕೃಷ್ಣ (756-774)

  • ಎರಡನೇ ಕೀರ್ತಿವರ್ಮನನ್ನು ಸಂಪೂರ್ಣವಾಗಿ ಸೋಲಿಸಿ ಇಡೀ ಬಾದಾಮಿಯನ್ನು ಮಾನ್ಯಪೇಟದಲ್ಲಿ ವಿಲೀನ ಮಾಡಿ ಅಧಿಕಾರ ನಡೆಸಿದ.
  • ಈತ ಗಂಗರ ದೊರೆಯಾದ ಶ್ರೀ ಪುರುಷನನ್ನು ಸೋಲಿಸಿದನು.
  • ಈತ ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು. ಇದು ಎಂಟನೇ ಶತಮಾನದ ಅದ್ಭುತ ರಚನೆ.
  • ಇದು 16ನೇ ಗುಹೆಯಲ್ಲಿ ಕಂಡುಬರುತ್ತದೆ. ಇದನ್ನು ಪರ್ಸಿಬ್ರೌನ್ "ಭೂಲೋಕದ ಅದ್ಭುತ ರಚನೆ" ಎಂದಿದ್ದಾನೆ.
  • ಈತ 15ನೇ ಗುಹೆ ಆದ ದಶಾವತಾರ ಗುಹೆಯನ್ನು ನಿರ್ಮಿಸಿದನು. ಇದು ಎಲ್ಲೋರದಲ್ಲಿ ಕಂಡುಬರುವ ಅತ್ಯಂತ ದೊಡ್ಡ ಗುಹೆ.

ಎರಡನೇ ಗೋವಿಂದ (774-780)

  • ಧ್ರುವ (780-793)
    • ಬಿರುದು → ಧಾರಾವರ್ಷ, ಕಲಿವಲ್ಲಭ, ನಿರೂಪಮ.
    • ಧ್ರುವ ತನ್ನ ಸಹೋದರನಾದ ಎರಡನೇ ಗೋವಿಂದನನ್ನು ಸೋಲಿಸಿ ಆತನ ಸಹಾಯಕ್ಕೆ ಬಂದ ಗಂಗಾ ದೊರೆಯಾದ ಎರಡನೇ ಶಿವಮಾರನನ್ನು ಸೋಲಿಸಿದನು.
    • ಉತ್ತರ ಭಾಗದಲ್ಲಿ ಕನೋಜ್ ಭಾಗವನ್ನು ಆಯುಧ ಮನೆತನದ ಇಂದ್ರಾಯದ ಆಳ್ವಿಕೆ ಮಾಡುತ್ತಿದ್ದನು.
    • ಈತ ಅಪ್ರಬಲನಾಗಿದ್ದರಿಂದ ಕನೋಜದ ಭಾಗಕ್ಕಾಗಿ ಗುರ್ಜರ-ವತ್ಸರಾಜ ಮತ್ತು ಬಂಗಾಳದ ಧರ್ಮಪಾಲನ ಮಧ್ಯೆ ಯುದ್ಧ ಏರ್ಪಟ್ಟು ವತ್ಸರಾಜ ಭಾಗವನ್ನು ಗೆದ್ದು.
    • ಧ್ರುವ ನೇರವಾಗಿ ಜಾನ್ಸಿ ಕದನದಲ್ಲಿ ವತ್ಸರಾಜನನ್ನು ಸೋಲಿಸಿ ಕನೋಜನ್ನು ಗೆದ್ದು.
    • ಈತ ಬಂಗಾಳದ ಧರ್ಮ ಪಾಲನನ್ನು ಯಮುನಾ ನದಿಯ ದಂಡೆಯ ಮೇಲೆ ಸೋಲಿಸಿದನು.
    • ಈತ ದ್ವಾರಸಮುದ್ರದಲ್ಲಿ (ಹಳೇಬೀಡು) ಒಂದು ಕೆರೆಯನ್ನು ಕಟ್ಟಿಸಿದ ಎಂದು ಉಲ್ಲೇಖಿಸಲಾಗುತ್ತದೆ.

ಮೂರನೇ ಗೋವಿಂದ (793-814)

  • ಬಿರುದುಗಳು: ತ್ರಿಭುವನದವಳ, ಪ್ರಭುತವರ್ಷ, ಜೀನವಲ್ಲಭ
  • ಈತ ಗುರ್ಜರ ಅರಸರಾದ ಎರಡನೇ ನಾಗಭಟ್ಟನನ್ನು ಸೋಲಿಸಿದ.
  • "ಸಂಜಾನ್ ಶಾಸನದ ಪ್ರಕಾರ" → ಮೂರನೇ ಗೋವಿಂದನ ಕುದುರೆಗಳು ಹಿಮಾಲಯದ ತಪ್ಪಲಿನ ಗಂಗಾಜಲವನ್ನು ಕುಡಿದವೆಂದು ಉಲ್ಲೇಖಿಸಲಾಗುತ್ತದೆ.

ಒಂದನೇ ಅಮೋಘವರ್ಷ ನೃಪತುಂಗ (814-878)

  • ಮೊದಲು ಹೆಸರು → ಶರ್ವ
  • ತಂದೆ → ಮೂರನೇ ಗೋವಿಂದ
  • ತಾಯಿ → ಗಾಮುಂಡಾಂಬ್ರ
  • ಈತ ಜೈನ ಧರ್ಮವನ್ನು ಸ್ವೀಕರಿಸಿದ.
  • ಈತ 14ನೇ ವರ್ಷಕ್ಕೆ ಅಧಿಕಾರಕ್ಕೆ ಬಂದ (ಭಾರತದಲ್ಲಿ 64 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಏಕೈಕ ದೊರೆ)
  • ಈತನ ಸೇವಕ → ಬಂಕೇಶ. ಈತನ ನೆನಪಿಗಾಗಿ ಬಂಕಾಪುರ ನಗರವನ್ನು ನಿರ್ಮಿಸಿದ.
  • ಆಸ್ವಾನದ ಕವಿ → ಶ್ರೀವಿಜಯ ಈತ "ಕವಿರಾಜಮಾರ್ಗ" ಗ್ರಂಥವನ್ನು ಬರೆದ.

NOTE: ಕವಿರಾಜಮಾರ್ಗ

  • ಇದು ಕನ್ನಡದ ಮೊಟ್ಟಮೊದಲು ಉಪಲಬ್ಧ ಕೃತಿ.
  • ಇದು ರಾಷ್ಟ್ರಕೂಟರ ಇತಿಹಾಸದ ಬಗ್ಗೆ ವಿವರಣೆ ನೀಡುತ್ತದೆ.
  • ಇದು ಕರ್ನಾಟಕದ ಭೌಗೋಳಿಕ ಇತಿಹಾಸದ ಬಗ್ಗೆ ಉಲ್ಲೇಖಿಸುತ್ತದೆ.
  • ಇದು ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡು ಕನ್ನಡ ನಾಡು ಎಂದು ಉಲ್ಲೇಖಿಸಿದೆ.
  • ಇದು ಕಾವ್ಯದ ರಚನೆಯು ವ್ಯಾಕರಣದೋಷಗಳಿಂದ ಮುಕ್ತವಾಗಿ ಇರಬೇಕೆಂದು ಸೂಚಿಸಿದೆ.
  • ಇದು ಮೊಟ್ಟಮೊದಲು ಬಾರಿಗೆ ಯತಿಯ ಬಗ್ಗೆ ಪ್ರಸ್ತಾಪಿಸಲ್ಪಟ್ಟಿದೆ. (ಯತಿ ಎಂದರೆ → ಪದ್ಯದ ನಿಯತವಾದ ಸ್ನಾನದಲ್ಲಿ ನಿಂತು ಹಾಡುವುದು)
  • ವಿದ್ವಾಂಸನಾದ ಒಂದನೇ ನೃಪತುಂಗ "ಪ್ರಶ್ನೋತ್ತರ ರತ್ನಮಾಲ" ಗ್ರಂಥವನ್ನು ಬರೆದನು.
  • ಬರಗಾಲ/ಕ್ಷಾಮ ಉಂಟಾದಾಗ ಕೊಲ್ಲಾಪುರದ ಮಹಾಲಕ್ಷ್ಮಿಗೆ ತನ್ನ ಎಡಗೈ ಹೆಬ್ಬೆರಳನ್ನು ಕತ್ತರಿಸಿ ಕೊಟ್ಟ ಇದರ ಉಲ್ಲೇಖ ಸಂಜಾನ್ ಶಾಸನದಲ್ಲಿ ಕಂಡುಬರುತ್ತದೆ.
  • ಒಂದನೇ ನೃಪತುಂಗ ಕಾಗೆಮೊಗೂರು ಕದನದಲ್ಲಿ (816) ಗಂಗಾ ದೊರೆಯಾದ ಎರಡನೇ ಶಿವಮಾರನನ್ನು ಸೋಲಿಸಿದ.
  • ಅಲ್ಲಿಕರವರ ಪ್ರಕಾರ → ಈತನನ್ನು "ಕರ್ನಾಟಕದ ಅಶೋಕ" ಎಂದು ಕರೆಯುವರು.

ಎರಡನೇ ಕೃಷ್ಣ (878-914)

  • ಈತನ ಕಾಲದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯವು ಕ್ಷೀಣಿಸತೊಡಗಿತು.

ಮೂರನೇ ಇಂದ್ರ (914-929)

  • ಇನ್ನೊಂದು ರಾಜಧಾನಿ → ಮಯೂರಬಂಡಿ (ಬೀದರ್ ಜಿಲ್ಲೆ)
  • 20 ಲಕ್ಷ ಬೆಳ್ಳಿಯ ನಾಣ್ಯಗಳನ್ನು ಧಾನ ಮಾಡಿ "ನಿತ್ಯವರ್ಷ" ಎಂಬ ಬಿರುದನ್ನು ಹೊಂದಿದ್ದ.
  • 400 ಗ್ರಾಮಗಳನ್ನು ಬ್ರಾಹ್ಮಣರಿಗೆ ಧಾನ ಮಾಡಿದ.
  • ಆಸ್ವಾನದಲ್ಲಿ ತ್ರಿವಿಕ್ರಮ ಎಂಬಾತ → "ನಳ ಚಂಪೂ" ಕೃತಿಯನ್ನು ಬರೆದ. ಇದು ಸಂಸ್ಕೃತದ ಮೊದಲ ಚಂಪು ಕೃತಿ.
    • ಚಂಪು ಕೃತಿ ಎಂದರೆ → ಗದ್ಯ ಮತ್ತು ಪದ್ಯಗಳ ಮಿಶ್ರಿತ ಕಾವ್ಯ.
  • ಬಿರುದು → ರಟ್ಟ ಕಂದರ್ಪ

ಮೂರನೇ ಕೃಷ್ಣ (938-967)

  • ರಾಷ್ಟ್ರಕೂಟರ ಕೊನೆಯ ಪ್ರಬಲ ದೊರೆ.
  • ಆಸ್ವಾನದ ಕವಿ → ಪೊನ್ನ, ಈತ "ಶಾಂತಿಪುರಾಣ" ಮತ್ತು "ಭುವನ್ಯಕ್ಕ ರಾಮಾಬುದ್ಧಯಂ" ಎಂಬ ಕೃತಿಯನ್ನು ಬರೆದನು.
  • ಚೋಳರನ್ನು ಸೋಲಿಸಿ ಕಂಚಿಯವರೆಗೂ ಓಡಿಸಿಕೊಂಡು ಹೋದ ಈತ ರಾಮೇಶ್ವರದಲ್ಲಿ ವಿಜಯ ಸ್ತಂಭವನ್ನು ನಿರ್ಮಿಸಿದ ಮತ್ತು ಕೃಷ್ಣೇಶ್ವರ ದೇವಾಲಯವನ್ನು ನಿರ್ಮಿಸಿದ.
  • ಈತನ ಕಾಲದಲ್ಲಿ ಪ್ರಸಿದ್ಧ ತಕ್ಕೊಳಗೂ (949ರಲ್ಲಿ) ಕದನ ನಡೆಯಿತು.
    • ತಕ್ಕೊಳಗೂ ಕದನ → ಮೂರನೇ ಕೃಷ್ಣ (ರಾಷ್ಟ್ರಕೂಟರು ಗೆದ್ದರು) ಮತ್ತು ಒಂದನೇ ಪರಾಂತಕ ಚೋಳ (ಚೋಳರು ಸೋತರು).
  • ಈಗ ಕದನದಲ್ಲಿ ಗಂಗದೇವ ಎರಡನೇ ಬೂತುಗ ಮೂರನೇ ಕೃಷ್ಣನಿಗೆ ಸೈನಿಕ ಸಹಾಯ ಮಾಡಿದನು. ಆದ್ದರಿಂದ ಮೂರನೇ ಕೃಷ್ಣ ಎರಡನೇ ಬೂತುಗನಿಗೆ ಬನವಾಸಿ 12000 ಪ್ರದೇಶವನ್ನು ಬಳಸಿಕೊಂಡು ಕೂಟ್ಯ.

ಖೋಟ್ಟಿಗ (967-972)

  • ಈತನ ಕಾಲದಲ್ಲಿ ರಾಷ್ಟ್ರಕೂಟರ ಅವನತಿ ಪ್ರಾರಂಭಗೊಂಡಿತು.

ಎರಡನೇ ಕರ್ಕ (972-973)

  • ಈತ ರಾಷ್ಟ್ರಕೂಟರ ಕೊನೆಯ ದೊರೆ.
  • ಎರಡನೇ ಕರ್ಕವನ್ನು, ಎರಡನೇ ತೈಲಪ ಸೋಲಿಸುವುದರ ಮೂಲಕ ಕಲ್ಯಾಣ ಚಾಲುಕ್ಯರ ಮನೆತನವನ್ನು ಪ್ರಾರಂಭಿಸಿದ.

ಆಡಳಿತ ವ್ಯವಸ್ಥೆ

  • ವಂಶ ಪಾರಂಪರ್ಯವಾಗಿತ್ತು → ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರವಾಗುತ್ತಿತ್ತು.
  • ರಾಷ್ಟ್ರಕೂಟರ ಮಂತ್ರಿ ಮಂಡಲ:
    • ಅಮಾತ್ಯ → ಪ್ರಧಾನಮಂತ್ರಿ
    • ಕರಣಿಕ → ಲೆಕ್ಕಪತ್ರಿಗ
    • ಭಂಡಾರಿ → ಹಣಕಾಸು ಮಂತ್ರಿ
    • ಮಹಾಸಂಧಿವಿಗ್ರಹ → ವಿದೇಶಾಂಗ ಮಂತ್ರಿ
    • ಸೇನಾಧಿಪತಿ → ಸೇನೆಯ ಮುಖ್ಯಸ್ಥ

ಪ್ರಾಂತ್ಯ ಆಡಳಿತ

ಸಾಮ್ರಾಜ್ಯ ರಾಜ ↓ ರಾಷ್ಟ್ರ (ಪ್ರಾಂತ್ಯ) → ರಾಷ್ಟ್ರಪತಿ ↓ ವಿಷಯ (ಜಿಲ್ಲೆ) → ವಿಷಯಪತಿ ↓ ನಾಡು (ತಾಲೂಕು) → ನಾಡಗಾವುಂಡ ↓ ಗ್ರಾಮ → ಗ್ರಾಮಿಕ

  • ರಾಷ್ಟ್ರಕೂಟರು ನಾಡುಗಳಿಗೆ ಮುಂಚೆ ಬುಕ್ತಿಗಳೆಂದು ಕರೆಯುತ್ತಿದ್ದರು. ಭಕ್ತಿಯ ಮುಖ್ಯಸ್ಥ → ಭೋಗಿಕ / ಭೋಗಿಪತಿ.
  • ಇವರ ಕಾಲದಲ್ಲಿ ನಾಣ್ಯಗಳನ್ನು, ಟಂಕಿಸುವ ಶಾಲೆಗಳನ್ನು, ಅಕ್ಕಂ ಶಾಲೆಗಳೆಂದು ಕರೆಯುವರು.

ಸಾಮಾಜಿಕ/ಧಾರ್ಮಿಕ ವ್ಯವಸ್ಥೆ

  • ಬ್ರಾಹ್ಮಣರ ಸ್ನಾನಮಾನಗಳು ಉನ್ನತವಾಗಿದ್ದವು.
  • ಕ್ರಿಯರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
  • ಇವರ ಕಾಲದ ಪ್ರಮುಖ ಶಿಕ್ಷಣ ಕೇಂದ್ರಗಳು:
    1. ಕಳೆನಿ (ಹಾವೇರಿ)
    2. ಸಾಲೋಟಗಿ (ವಿಜಯಪುರ)
    3. ಬಳ್ಳಿಗಾವೆ (ಶಿವಮೊಗ್ಗ)

ಆರ್ಥಿಕ ವ್ಯವಸ್ಥೆ

  • ಭೂ ಕಂದಾಯ ¼ ಇತ್ತು.
  • ರೋಮ್ ಮತ್ತು ಅರಬ್ಬರೊಂದಿಗೆ ವ್ಯಾಪಾರದ ಸಂಪರ್ಕವಿತ್ತು.
  • ಅರಬ್ಬರು ರಾಷ್ಟ್ರಕೂಟರನ್ನು → "ಮಲಿಕ್ ಅಲ್ ಮುಲ್ಕ್" (ರಾಜರಿಗೆ ರಾಜರು) ಎಂದಿದ್ದಾರೆ.

ಸಾಹಿತ್ಯ

  • ತ್ರೀವಿಜಯ
  • ಕವಿರಾಜಮಾರ್ಗ ಗ್ರಂಥ
  • ಶಿವಕೋಟಾಚಾರ್ಯ
  • ವಡ್ಡಾರಾಧನೆ
  • ತ್ರೀವಿಕ್ರಮ
  • ನಳ ಚಂಪು
  • ಪೊನ್ನ
  • ಶಾಂತಿಪುರಾಣ, ಭುವನ್ಯಕ್ಕ ರಾಮಾಬುದ್ಧಯಂ
  • ಹಲಾಯುಧ
  • ಕವಿರಹಸ್ಯ
  • ಗುಣಭದ್ರ
  • ಉತ್ತರ ಪುರಾಣ
  • ಜೀನಸೇನ
  • ಪೂರ್ವಪುರಾಣ, ಹರಿವಂಶ
  • ವೀರಸೇನ
  • ಧವಳ
  • ಮಹಾವೀರಚಾರ್ಯ
  • ಗಣಿತ ಸಾರ ಸಂಗ್ರಹ

ಕಲೆ ಮತ್ತು ವಾಸ್ತುಶಿಲ್ಪ

  • ರಾಷ್ಟ್ರಕೂಟರ ಬಹುತೇಕ ದೇವಾಲಯಗಳು ದ್ರಾವಿಡ ಶೈಲಿಯಲ್ಲಿವೆ.
  • ಇವರು ಬಂಡೆಗಳನ್ನು ಕೊರೆದು ಮಾಡಿದ ಗುಹಾಂತರ ದೇವಾಲಯಗಳು ಇವರ ಅದ್ಭುತವಾದ ರಚನೆಗಳು.

1) ಎಲ್ಲೋರ್

  • ರಾಜ್ಯ – ಮಹಾರಾಷ್ಟ್ರ
  • ಇದು 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆ. ಇಲ್ಲಿ ಒಟ್ಟು 34 ಗುಹೆಗಳು ಕಂಡುಬರುತ್ತವೆ.
    • ಪ್ರಾರಂಭದ 12 ಗುಹೆಗಳು ಬೌದ್ಧ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ಮಧ್ಯಭಾರತದ ವಾಕಟಕರು ನಿರ್ಮಿಸಿದರು.
    • ನಂತರದ 18 ಗುಹೆಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ರಾಷ್ಟ್ರಕೂಟರು ಮತ್ತು ಕಲಚೊರಿಗಳು ನಿರ್ಮಿಸಿದರು.
    • ಕೊನೆಯ 4 ಗುಹೆಗಳು ಜೈನ ಧರ್ಮಕ್ಕೆ ಸಂಬಂಧಿಸಿದೆ. ಇವುಗಳನ್ನು ದೇವಗಿರಿಯ ಯಾದವರು ನಿರ್ಮಿಸಿದರು.
    • ಇಲ್ಲಿ 10ನೇ ಗುಹೆ ವಿಶ್ವಕರ್ಮದ ಗುಹೆ.
    • 15ನೇ ಗುಹೆ ದಶಾವತಾರ ಗುಹೆ.
    • 16ನೇ ಗುಹೆ ಕೈಲಾಸನಾಥ ದೇವಾಲಯವಿರುವ ಗುಹೆ.
    • 32ನೇ ಗುಹೆ ಇಂದ್ರ ಸಭಾ ಗುಹೆ.

2) ಅಜಂತಾ

  • ಒಟ್ಟು 29 ಗುಹೆಗಳು. ಬೌದ್ಧ ಧರ್ಮಕ್ಕೆ ಸಂಬಂಧಿಸಿವೆ. ಇದು 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡಿತು.

3) ಎಲಿಫೆಂಟಾ

  • ಇದರ ಮೊದಲು ಹೆಸರು: ಘೋಷಕಪುರಿ
  • ಇದು 1987ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಂಡಿತು.
  • ಇದನ್ನು ಎಲಿಫೆಂಟಾ ಎಂದು ಕರೆದವರು ಪೋರ್ಚುಗೀಸರು.
  • ಇಲ್ಲಿ ಏಳು ಗುಹೆಗಳು ಕಂಡುಬರುತ್ತವೆ. ಮಧ್ಯದಲ್ಲಿರುವ ಗುಹೆಯಲ್ಲಿ ತ್ರಿಮೂರ್ತಿ ವಿಗ್ರಹ (ಬ್ರಹ್ಮ, ವಿಷ್ಣು, ಮಹೇಶ್ವರ)
  • ಮೂರ್ತಿ ಅಷ್ಟೇ 18 ಅಡಿ ಎತ್ತರವಿದೆ.
  • ಎಳೆಯಿಂದ 20 ಅಡಿ ಎತ್ತರವಿದೆ.

No comments:

Post a Comment

ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು

  ಆಗಸ್ಟ್ ೨೬, ೨೦೨೫ ರ ಪ್ರಚಲಿತ ಘಟನೆಗಳು ೧. ಮೈಸೂರಿನ ಮಧುಸೂದನ್‌ಗೆ ಕೇಂದ್ರದ ಉತ್ತಮ ಶಿಕ್ಷಕ ಪ್ರಶಸ್ತಿ ವಿವರ: ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ...